Monday, September 15, 2014

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಆಸ್ಟ್ರೇಲಿಯ ಅತಿಥಿ




             ಆಸ್ಟ್ರೇಲಿಯಾದ ಜೂಲಿಯನ್ ಫಾಂಗ್ ಚೀನೀ ಮೂಲದವರು. ಹಲಸಿನ ರುಚಿಯ ಬೆನ್ನೇರಿ ಕರಾವಳಿಗಿಳಿದರು. ಇಲ್ಲಿನ ಕೃಷಿಕರನ್ನು ಭೇಟಿ ಮಾಡಿದರು. ಹಲಸಿನ ಉತ್ಪನ್ನಗಳನ್ನು ಸವಿದರು. ಮೂರು ದಿವಸದ ಸುತ್ತಾಟದ ಬಳಿಕ ಇಂದು ಪೂರ್ವಾಹ್ನ (15-9-2014) ಪುತ್ತೂರು (ದ.ಕ.) ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಜೂಲಿಯನ್ ಫ್ಯಾಂಗ್ ಅವರೊಂದಿಗೆ ವಿದ್ಯಾರ್ಥಿಗಳು ಮಾತುಕತೆ ನಡೆಸಿದರು.
           ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕಮ್ಮಜೆ  ಉಪಸ್ಥಿತರಿದ್ದರು. ಇಪ್ಪತ್ತೊಂದರ ಹರೆಯದ ಜೂಲಿಯನ್ ಮಕ್ಕಳೊಂದಿಗೆ ಮಕ್ಕಳಾದರು. ತನ್ನೂರಿನ ಕೃಷಿ, ಬದುಕನ್ನು ನೆನಪಿಸಿಕೊಂಡರು. ಹಲಸಿನ ಸಾಧ್ಯತೆಗಳನ್ನು ವಿನಿಮಯ ಮಾಡಿಕೊಂಡರು. ಭಾಷಾ ತೊಡಕಿದ್ದರೂ ವಿದ್ಯಾರ್ಥಿಗಳು ಉತ್ಸಾಹದಿಂದ ಪ್ರಶ್ನೋತ್ತರದಲ್ಲಿ ಭಾಗವಹಿಸಿದ್ದರು.
            ಕಾಲೇಜಿಗೆ ಆಗಮಿಸಿದ ಆಸ್ಟ್ರೇಲಿಯ ಅತಿಥಿಯನ್ನು ಪ್ರಾಂಶುಪಾಲ ಡಾ.ಮಾಧವ ಭಟ್ ಸ್ವಾಗತಿಸಿದರು. ಕಾಲೇಜಿನ್ ಕ್ಯಾಂಟಿನಿನಲ್ಲಿ ಉಪಾಹಾರ ಸ್ವೀಕರಿಸಿದ ಜೂಲಿಯನ್ ಇಲ್ಲಿನ ’ಬನ್ಸ್’ ತಿಂಡಿಯನ್ನು ಮೆಚ್ಚಿಕೊಂಡರು!


0 comments:

Post a Comment